Slide
Slide
Slide
previous arrow
next arrow

ಅ.29ಕ್ಕೆ ‘ಬ’ ಖರಾಬಗೊಳಿಸಲ್ಪಟ್ಟ ಬೆಟ್ಟ ಭೂಮಿ ಮಾಹಿತಿ ಕಾರ್ಯಕ್ರಮ

300x250 AD

ಯಲ್ಲಾಪುರ: ತೋಟಿಗ ಕೃಷಿಕರಿಗೆ ಬೆಟ್ಟ ಭೂಮಿಯ ಸಂಬಂಧದ ಬಗ್ಗೆ ಹಾಗೂ ‘ಬ’ ಖರಾಬಗೊಳಿಸಲ್ಪಟ್ಟ ಬೆಟ್ಟ ಭೂಮಿಯ ಕುರಿತು ಮಾಹಿತಿ ಕಾರ್ಯಕ್ರಮ ಯಲ್ಲಾಪುರ ಟಿಎಂಎಸ್ ಸಭಾಭವನದಲ್ಲಿ ಅ.29 ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉತ್ತರಕನ್ನಡ ಜಿಲ್ಲಾ ಕೃಷಿ, ಕೃಷಿಕ ಹಾಗೂ ಕೃಷಿ ಪತ್ತು ಸಂಘಗಳ ಶ್ರೇಯೀಭಿವೃದ್ಧಿ ಟ್ರಸ್ಟ್ ಹಾಗೂ ಟಿಆರ್‌ಸಿ ಅಧ್ಯಕ್ಷರಾದ ರಾಮಕೃಷ್ಣ ಶ್ರೀಪಾದ ಹೆಗಡೆ ಕಡವೆ ವಹಿಸುವರು.
ಯಲ್ಲಾಪುರ ಟಿಎಂಎಸ್‌ನ ಅಧ್ಯಕ್ಷರಾದ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ ಕಾರ್ಯಕ್ರಮ ಉದ್ಘಾಟಿಸುವರು.

300x250 AD

ಕೃಷಿ ಕೃಷಿಕ ಕೃಷಿ ಪತ್ತು ಸಂಘಗಳ ಶ್ರೇಯೊಭಿವೃದ್ಧಿ ಟ್ರಸ್ಟ್ ಹಾಗೂ ಬೆಟ್ಟ ಭೂಮಿ ಜಾಗೃತಿ ಅಭಿಯಾನದ ಆಯೋಜಕರಾದ ಎಸ್.ಕೆ. ಭಾಗ್ವತ್ ಶಿರ್ಸಿಮಕ್ಕಿ ಅವರ ಆಯೋಜನೆಯಲ್ಲಿ ಯಲ್ಲಾಪುರ ತಾಲೂಕಿನ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಹಾಗೂ ಮಾರಾಟ ಸಹಕಾರ ಸಂಘಗಳ ಸಹಕಾರದಲ್ಲಿ ಕಾರ್ಯಕ್ರಮ ನಡೆಯಲಿದ್ದು ಬೆಟ್ಟ ಬಳಕೆದಾರರು ಭಾಗವಹಿಸಿ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Share This
300x250 AD
300x250 AD
300x250 AD
Back to top